ಕನಕಧಾರಾ ಕ್ರಿಯೇಷನ್ಸ್ ಲಾಂಚನದಲ್ಲಿ, ರಂಗರಾಜನ್, ಕಿಶೋರ್, ಕೌಸ್ತುಭಧರನ್ ನಿರ್ಮಾಣದ, ಕಣ್ಣಂಚಿನ ಈ ಕನಸಲಿ ಚಿತ್ರಕ್ಕೆ ನಗರದ ಸುತ್ತಮುತ್ತ ನಡೆದ ಚಿತ್ರೀಕರಣದೊಂದಿಗೆ ಶೇ. ೫೦ ಭಾಗ ಪೂರ್ಣಗೊಂಡಂತಾಗಿದೆ.
ಈ ಚಿತ್ರದ ನಿರ್ದೇಶನ ಧವನಿ-ಕೌಸ್ತುಭ್, ಛಾಯಾಗ್ರಹಣ - ಕೆ. ವಾಸುದೇವ್, ಸಂಗೀತ - ಹರ್ಷ, ಕಿಶೋರ್, ನಿರ್ವಹಣೆ - ಕೆ.ಎಸ್. ಸಂಗಮೇಶ್ ಅವರದ್ದು.
ಪರಿಸರ ಸಂರಕ್ಷಣೆಯ ಸಾಮಾಜಿಕ ಸಂದೇಶದ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಗಣದಲ್ಲಿ ಕೌಸ್ತುಭಧರನ್, ವರ್ಷಿಣಿ, ಅನನ್ಯಾ, ತರಂಗಿತ, ಹಂಸರಾಜ್, ಗಿರೀಶ್ ಜತ್ತಿ, ಹುಬ್ಬಳ್ಳಿ ಮಂಜುಳಾ, ರೂಪಶ್ರೀ, ಪಲ್ಟಿ ಗೋವಿಂದ ಅಲ್ಲದೆ, ವಿಶೇಷ ಪಾತ್ರದಲ್ಲಿ, ಸಂಚಾರಿ ವಿಜಯ್ ಮತ್ತು ವಿ. ಮನೋಹರ್ ಅಭಿನಯಿಸಿದ್ದಾರೆ.